ಸೋಮವಾರ, ಮೇ 25, 2015
ಸವಾಲಿನ ಹೆಡಿಗೆ ತುಂಬಾ
ಹೇಲು ಹೊತ್ತು ಹೊರಟವಳು ..
ಅಂಜಿಕೆಯಿಲ್ಲ,ಅಳುಕಿಲ್ಲಾ
ನಿಲುವಿನೇಜ್ಜೆಯ ದಾರಿ ಸ್ಪಷ್ಟ....
ಕೇಳಿರಣ್ಣಾ, ಕೇಳಿರಪ್ಪಾ ಕೇಳಿರಯ್ಯ..
ನನ್ನ ಆರ್ತನಾದವಲ್ಲವಿದು
ಹೊಟ್ಟೆಯುರುಕರಚ್ಚಿದ ಅಗ್ಗಿಷ್ಟಿಕೆ...
ಬರಸಿಡಿಲು ಭರಿತ ಮಡಿಲಿಗೆ
ಅಳುವೊರೆಸಿ ಸೆರಗ ಕಟ್ಟಿರುವೆ ..
ಬಿಚ್ಚಿನೋಡಿ ನೆಣವಿದ್ದರೇ
ಅಣುಸ್ಪೋಟಕೇ ಎದೆಯೊಡ್ಡಿ..
ಹನಿಮಳೆಯ ಹೊಗಳಿ ನೆನೆಯದಿರಿ..
ನಿಮ್ಮದೇ ಹೇಲು ಹೊರಿಸಿದ್ದು
ನನಗೆಂತ ನಾಚಿಕೆ ಹೊರಲು,
ಹೊಸಲಿನ ಗೌಲು ಹೊಮ್ಮಲು ನಿಮ್ಮಲೂ..
ದ್ರೋಣಾಲಿಂಗನದ ಅರ್ಜುನರೇ
ನಿಮ್ಮಲ್ಲೇ ಇರಲಿ, ಹೆಸರೆಲ್ಲಾ
ಬೆರಳು ಕೊಡಲೆನೆಗೆ ಅಳುಕಿಲ್ಲ..
ನಿಮ್ಮೆಲ್ಲಾ ಸ್ವಾರ್ಥ ಪಾತ್ರ ಪೋಶಿಸಲಿ
ನನ್ನೀ ಹೀನ ಬದುಕಿನ ಪಾತ್ರೆ ..
ಕಸದ ಕಾಸೂ ಕಸಿದುಕೊಳ್ಳಿ,
ಉದರ ನ್ಯೆವೈದ್ಯದೆಡೆ ಬಡಿಸಲು ಕಸುವಿದೆ
ನೋವ ನೆರಿಗೆಗೆಯನೆಳೆಯದಿರಿ..
ಬಲಿತವಳಲ್ಲ, ಬಲ್ಲಿದಳಲ್ಲಾ
ಹಣೆಬರಹಕೇ ದೇವರೊಲುಮೆಯಿಲ್ಲ
ಆಶಯದ ದೀಪವೊಂದೇ, ಆರಿಸಿದಿರಿ
ಕದ್ದವಳಲ್ಲ, ಕಳ್ಳಿಯಲ್ಲ ಶೋತ್ರುಗಳೇ
ಅಕ್ಷರ ಬಿಕ್ಷುಕಿ ಶಿಕ್ಷಿಸಿ ,ಭಕ್ಷಿಸದಿರಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ