ಆಶಾ ದೀಪ
ಸೋಮವಾರ, ಮೇ 25, 2015
ಶನಿವಾರ, ಫೆಬ್ರವರಿ 14, 2015
ಏನೆಂದು ಹೆಸರಿಡಲಿ
ನಾನಾದರೂ ಕೇಳಲಿಲ್ಲ
ನೀನಾದರೂ ಹೇಳಲಿಲ್ಲ
ತಿಳಿಯದಾದೆ ನಾ
ನಿನ್ನ ಮನದ ಭಾವನೆಯ
ಹೇಗೆಂದು ನಾ ಅಥೈ೯ಸಲಿ
ಹೆಸರಿಡದ ಈ ಬಂಧವಾ?
ಎಲ್ಲಕ್ಕೂ ಮೀರಿದ ಬಂಧನ
ನಮ್ಮೀ ಮನದ
ಭಾವನೆಗಳ ಸಮ್ಮಿಲನ
ಸಾಗರದಲೆಗೆ ನಿಲುಕದ್ದು
ಗಗನದಾಚಿನ ಅಂಚಿನದು
ಒಮ್ಮೆ
ಉತ್ತರಿಸುವಿರಾ
ಆಲಿಸುವಿರಾ
ಮಿಂಚಿನವೇಗದ
ಕಣ್ಣಂಚಿನ ನೋಟದ ಈ ಅಥ೯ವ
ಶುಕ್ರವಾರ, ಫೆಬ್ರವರಿ 13, 2015
ಬಿಳಿ ಹಾಳೆ
ನೋವಾದರೂ
ನಲಿವಾದರೂ
ನೀನೇನೆ ಎಲ್ಲಾ ನನಗೆ
ಮುಚ್ಚು ಮರೆಯಿಲ್ಲದೆ
ಹುಚ್ಚಿಯಂತೆ ಒಮ್ಮೊಮ್ಮೆ
ಬಿಚ್ಚಿಡುವೆ ಎಲ್ಲವೂ ನಿನ್ನಲ್ಲಿ
ಅಳು ಬಂದರೂ
ಸಿಟ್ಟಾದರೂ
ನಿನ್ನನ್ನು ಬಿಟ್ಟು ಯಾರಿದಾರೆ
ಆಗಾಗ ಒದಗದೆಯಾಗಿಸಿದೆ
ಕೆಲವೊಮ್ಮೆ ಮುದ್ದೆ ಮಾಡಿ
ಮೂಲೆಗೆಸೆದಿರುವೆ
ಇದುವರೆಗೂ ನಿನ್ನ ನೋವೆನೆಂದು ಕೇಳದೆ
ಗೀಚಿಡುವೆ ನನಗನಿಸಿದ ಎಲ್ಲಾ
ಕ್ಷಮಿಸಿಬಿಡು
ಬಿಳಿ ಹಾಳೆ ಗೆಳೆಯ
ನನ್ನವರು ಅಂತ ನನಗ್ಯಾರಿಲ್ಲ
ನಿನ್ನವಿನಹ
.......
Hanigavan
ಯಾರು ಎಲ್ಲಿದ್ದರೇನಂತೆ
ಯಾರು ಜೊತೆಯಲ್ಲಿದ್ದರೆನಂತೆ
ನೆನಪೊಂದು ಜೊತೆಯಿರುವಾಗ
ಕಣ್ಣಿಗೆ ಕಾಣುವುದೆಲ್ಲ
ಅವನ ಪ್ರತಿಬಿಂಬವೇ
ಗುರುವಾರ, ಫೆಬ್ರವರಿ 12, 2015
ನನ್ನ ಹೆಣಕ್ಕೊಬ್ಬ ವಾರುಸುದಾರ
ನನ್ನ ಹೆಣಕ್ಕೊಬ್ಬ ವಾರಸುದಾರ
ಬೇಕಿದೆ
~~~~~~~~~~~~~~~~~~
ಹಾ ಬೇಕಾಗಿದೆ ನನ್ನ ಹೆಣಕ್ಕೊಬ್ಬ
ವಾರಸುದಾರ
ವಾಸ್ತವತೆಯನ್ನು ಮರೆತ ಹೃದಯವು
ಹಿಮದ ತಿಳಿಯಲ್ಲಿ
ಅಡಿಯಲ್ಲಿ
ಹುದುಗಿರುವ ಬೀಜಗಳು
ಕನಸು ಕಾಣುವ ಹಾಗೆ
ಹೆಣೆಯುತ್ತಿವೆ ಕನಸ್ಸಿನ ಮಾಲೆಯ
ಓ ವಾರಸುದಾರನೇ
ನನ್ನ ನಾಳಿನ ಹೆದರಿಕೆಯೇ
ನಿನ್ನ ಇಂದಿನ ಅವಶ್ಯಕತೆ,
ತಕ೯ಕ್ಕೆ ಸಿಗದ ವಿವರಿಸಲಾಗದ
ಸೆಳೆಯುವಿಕೆಯ ಆಳ
ಸುಳಿವಿದೆ
ರಕ್ತದ ಆವೇಗದ ಕೆಳಗೆ
ಈ ಜೀವತ್ಮದ ದಾಹವೂ
ಬಚ್ಚಿಟ್ಟ ರಾಶಿ ರಾಶಿ
ಕಾಮನಬಿಲ್ಲುಗಳ,
ಆಕಾರವಿಲ್ಲದ ಮುತ್ತು ಹವಳಗಳ
ಹುಡುಕಾಟದಲ್ಲಿದೆ
ನಿಜವಾದ ವಾರಸುದಾರನಿಲ್ಲದೆ
ತಕ೯ಕ್ಕೆ ಮೀರಿದ ಜಗತ್ತಿನೆಡೆಗೆ
ನನ್ನನ್ನು ಹಾರಿಸುವ
ವಾರಸುದಾರನೆಂದು
ನಾನು ನೀನುಗಳ ಭೇದವಳಿದು
ಉಭಯ ಸಂಕಟಗಳಿಂದ ಮುಕ್ತಿಯ ನೀಡು
ಸ್ವಚ್ಛಂದ ರಾಗಗಳಿಲ್ಲದ ಪಂಜರದಿಂದ
ನಿತ್ಯದ ಕಟ್ಟಳೆಯ ಬದುಕಿನ ಧಮ೯ದಿಂದ
ಸಾವಿನಷ್ಟೆ ಖಚಿತವಾದ ನಮ್ಮ ಆಗಲಿಕೆಯಿಂದ
ವೇದಶಾಸ್ತ್ರ, ಪುರಾಣಗಳನ್ನು
ಅಲ್ಲಲ್ಲಿ ತೂರಿ
ಈ ಶೂದ್ರ ತಪಸ್ವಿಯ ಕೈಯಲ್ಲಿ
ನಿನ್ನ ಸರಸಿಜೋದ್ದವನೀಯುತ್ತಾ
ಆಗುವೆಯ ನನ್ನ ವಾರಸುದಾರ
ಭಾನುವಾರ, ಫೆಬ್ರವರಿ 1, 2015
ಪ್ರೇಮಪತ್ರ
ಗಾಂಭೀರ್ಯದ ಸೋಗು ಹೊದ್ದ ಮನಸ್ಸು
~~~~~~~~~~~~~~~~~~
ಎಲೆಗೆ ಆತುಕೊಂಡು ನಿಂತ ಮಳೆ ಹನಿಯಂತೆ, ಜಗದ ಜಂಜಾಟಕ್ಕೆ ಜೋತು ಬಿದ್ದ ನನ್ನನ್ನು ನಿನ್ನೊಲವು ಆವಿಗೊಳಿಸಿ ಆಗಸದ ಆಲಯದಲ್ಲಿ ಗೊತ್ತು ಗುರಿ ಇಲ್ಲದ ದಾರಿಯಲ್ಲಿ ಅಲೆಯಲು ಬಿಟ್ಟಿದೆ.
ನೂರಾರು ಮೈಲು ದೂರದಲ್ಲಿ ನಿಂತು ಜಗದ ಸಕಲ ಇತಿಮಿತಿಗಳನ್ನು ಕಣ್ತುಂಬಿಕೊಳ್ಳುತಲಿರುವ ನನಗೆ ಎಲ್ಲವೂ, ಎಲ್ಲರೂ ಮಿತಿಯ ಮೂತ೯ ರೂಪವೇ ಅನಿಸುತ್ತೆ.
ನಮ್ಮೊಳಗೆ ಹುಟ್ಟುವ ಕಲ್ಪನೆಗಳು ಯಾರದೋ ನಿರೀಕ್ಷೆಗೆ ಮೂಗುದಾರ ಬಿಗಿಯುವುದು ವಿಚಿತ್ರವೆನಿಸುವ ವಾಸ್ತವ ಅಲ್ವ. ಇನ್ನೊಬ್ಬರ ಕನಸಿನ ಕೂಸಾಗಿ ಬಿಡುವ ನಾವು ನಮ್ಮದೇ ಕನಸಿನ ಬಾಲ ಹಿಡಿದು ಹೊರಟರೆ ನಮ್ಮನ್ನಾಳಲು ಹೊರಟವರ ಮನಸ್ಸಿಗೆ ವಾಸಿಯಾಗುತ್ತದೆ, ಅವರ ಭಾವನೆಗಳನ್ನು ಪುಸಲಾಯಿಸಲು ಹೋದಂತೆಲ್ಲ ನಮ್ಮ. ಕನಸ್ಸಿನ ಚಿತ್ರಗಳು ಬಣ್ಣ ಬದಲಿಸುತ್ತವೆ.
ನಿನ್ನನ್ನು ನಾನ್ಯಾಕೆ ಪ್ರೀತಿಸಿದೆ? ?ಅನ್ನೋ ಪ್ರಶ್ನೆಗೆ ಉತ್ತರ ಅರಸುವ ಪ್ರಕ್ರಿಯೆ ಈಗಲೂ ಚಾಲ್ತಿಯಲ್ಲಿದೆ ಪ್ರೀತಿ ಹುಟ್ಟಲೂ ಒಂದು ಕಾರಣ ಬೇಕಾ ,ಆ ಕಾರಣ ನಮ್ಮ ಗ್ರಹಿಕೆಗೆ ನಿಲುಕಲೇಬೇಕಾ,ಗಾಂಭೀರ್ಯದ ಸೋಗು ಹೊದ್ದುಕೊಂಡು ನಮ್ಮೊಳಗೆ ನಾವಿಳಿದಂತೆಲ್ಲ ಅಮೂತ೯ ಸುಖದ ದಶ೯ನವಾಗುವುದು ಸುಳ್ಳಂತೂ ಅಲ್ಲ, ಅಲ್ವ.
ಮುನಿಸು ಪ್ರೀತಿಯ ಅವಿಭಾಜ್ಯ. ಅಂಗವೆಂಬುದರ ಅರಿವಾದದ್ದು ನಿನ್ನನ್ನು ಬಿಡಿಯಾಗಿ ಗ್ರಹಿಕೆಯ ಪರಿಧಿಯೊಳಗೆ ಕೂರಿಸಿಡಲು ಯತ್ನಿಸಿ ಸೋತಾಗಲೇ
ಉಸಿರು ಬಿಗಿಹಿಡಿದು ನಿನ್ನನ್ನು ಕಣ್ತುಂಬಿಕೊಂಡ ಕ್ಷಣ ಈಗಲೂ ನನ್ನೊಳಗಿನ ನೆನಪಿನ ಗೂಡಲ್ಲಿ ಬೆಚ್ಚಗೆ ಕೂತಿದೆ.
ನೀ ಕಂಡರೂ ಕಾಣದಂತೆ ನಟಿಸುವುದು, ಪ್ರೀತಿಯಿಂದ ಮುನಿಸಿಕೊಳ್ಳುವುದು ನನ್ನ ತುಂಟತನದೆದುರು ಮಂಡಿಯೂರಿ ಕೂರುವುದು ನಿನ್ನದೇ ಆದ ತಿಕ್ಕಲು ಕೋಟಲೆಯಿಂದ ನನ್ನನ್ನು ಕಂಗೆಡಿಸಿ ಅಳಿಸುವುದು ಪ್ರೀತಿಯ ಪುಸ್ತಕದ ಬಿಡಿ ಪುಟಗಳಂತೆ ನನಗೆ ತೋರಿವೆ.
ಹಳೆ ನೋವುಗಳನ ಸಮಾಧಿ ಮೇಲೆ ನಿಂತು ಹೊಸ ನಲಿವಿನ ಸಸಿ ನೆಡಲು ನಾ ಕರೆದಂತೆಲ್ಲ ನೀ ತಕರಾರು ತೆಗೆಯದೆ ಸಹಜ ಪ್ರಕ್ರಿಯೆಯಾಗಿಸು ,ನೋವುಗಳನ್ನ ಧೇನಿಸುವುದರಲ್ಲೂ ವಿಚಿತ್ರ. ಸುಖವಿದೆ, ಹಾಗಂತ ನೆನಪಿನೂರಿನ ಸ್ಮಶಾನದಲ್ಲಿ ನೆಲೆ ನಿಂತ ನೋವುಗಳನ್ನು ಪದೇ ಪದೇ ಬಡಿದೆಬ್ಬಿಸುವುದೇಕೆ? ಅದನ್ನೇ ತಲೆಯ ಮೇಲೆ ಕೂರಿಸಿಕೊಂಡು ಹೊತ್ತು ಮೆರೆಸುವುದು ಖಯಾಲಿ ನಿನಗ್ಯಾಕೆ?
ಮನದ ತುಂಬಾ ಆವರಿಸಿದ ನಿರಾಶೆಗೆ ಮುಲಾಮು ತಿಕ್ಕುವ ಪ್ರೀತಿಗೆ ತಿಕ್ಕಲುತನವೇ ಜೀವ..
ರೀ ನಿನ್ನ ನೋವಿನ ನಿರಾಶೆ ನಾ ಹೆಣೆದ ಭವಿಷ್ಯದ ಹಸಿ ಕನಸು ಎಲ್ಲವೂ ಪ್ರೀತಿಯ ಪಯಣವನ್ನು
ಆಪ್ತವಾಗಿಸುತ್ತಿವೆ
ನಿನ್ನ. ನೋವನ್ನು ಕ್ಷಣ ಕಾಲ ದೂರ ಸರಿಸಿ ನನ್ನೊಂದಿಗೆ ತುಸು ತುಂಟಾಟಕ್ಕಿಳಿದರೂ ನಾ
ಧನ್ಯೆ
...........ನಿನಗಾಗಿ
ಸದಾ ಕಾಯುವ ಮೀನು
ರಬಸ
ಮೆಲ್ಲಗೆ ಗಾಳಿಯೇಳುತ್ತಿದೆಯೆನಿಸುತ್ತಿತ್ತು
ಅಲ್ಲೆಲ್ಲೋ ಸುಂಟರಗಾಳಿಯೆದ್ದು
ಮೋಡ ಕೆಂಧೂಳಿಯಿಂದ ಕೆಂಪಗಾಗಿತ್ತು
ಎಲ್ಲೋ ಹನಿಯುತ್ತಿರಬೇಕು
ಘಮ ಮೂಗಿಗೆಡರುತ್ತಿತ್ತು
ರೊಯ್ಯನೆ ಬಿರುಗಾಳಿಯೆದ್ದಿತು
ಮರ,ಗಿಡ,ಬೆಟ್ಟ....ಊಹೂಂ
ಯಾವ ತಡೆಯೂ ಇಲ್ಲ
ಯಾವುದೆ ತಡೆಯಿಲ್ಲದೆ
ಆ ನಿನ್ನ ಬಿರುಸಿಗೆ
ಅಬ್ಬರದ ಮಳೆ
ಹುಚ್ವುಹೊಳೆ
ಅದೇನು ರಭಸ
ಅದೇನು ಮೊರೆತ
ಹಾಗೆಯೇ ತಣ್ಣಗಾಯಿತು
ತಣಿಸಿದ ಭುವಿಯರಳಿತ್ತು
ದಣಿದ ಮಳೆ ಭುವಿಯಲ್ಲಿ ಹುದುಗಿತ್ತು
ಈಜು
ಮುಗಿದಿತ್ತು